ಇಳಿದು ಬಾ ಮಳೆರಾಯ

ಇಳಿದು ಬಾ ಮಳೆರಾಯ|
ನಮ್ಮೂರ ನೆಲ ಜಲಗಳೆಲ್ಲ
ಒಣಗಿ ಬತ್ತಿಹವು|
ಮರ ಗಿಡದೆಲೆಗಳೆಲ್ಲ ಉದುರುತ್ತಿಹವು
ಹಸು ಕರುಗಳಿಗೆಲ್ಲಾ
ಮೇವು ನೀರಿಲ್ಲದೆ ಸೊರಗುತಿಹವು||

ಮುನಿಸೇತಕೆ ನಮ್ಮಮೇಲೆ?
ಭೂತಾಯಿಯ ಸೇವೆ,
ಹಸು, ಕರುಗಳಸೇವೆಯ ಮಾಡುತ
ಲೋಕಕೆ ಅನ್ನವನು ಉಣಬಡಿಸುವೆವು|
ಹಸಿರನು ಬೆಳೆದು ಹಸುವಿಗೆ ನೀಡಿ
ಮಕ್ಕಳಿಗೆ ಹಾಲನು ನೀಡುವೆವು||

ರೈತನ ಮೇಲೆ ಕೋಪವದ್ಯಾಕೊ?
ಬೆನ್ನಮೇಲೆ ಹೊಡೆದರೆ
ಸಹಿಸಿ ಬದುಕಿಕೊಳ್ಳಬಹುದು
ಹೊಟ್ಟೆ ಮೇಲೆ ಹೊಡೆದರೆ
ದಹಿಸಿ ಬದುಕಲು ಸಾಧ್ಯವೇ?|
ನಮ್ಮ ಬೆವರಿಗೆ ನೀ
ಮಳೆಯ ಕರುಣಿಸು, ಕಣ್ಣೀರಿಗೆ
ಸುರಿಸುವುದು ತರವೇ?||

ರೈತನ ಹೆಂಡತಿ ಮಕ್ಕಳ ನೋಡು
ಕೂಳು ನೀರು ನಿದ್ದೆಗಳಿಲ್ಲದೆ
ಹೊಟ್ಟೆಯು ಬೆನ್ನಿಗೆ ಹತ್ತಿಹುದು|
ಮೈಯಲ್ಲಿ ಕಸುವು ಇಲ್ಲದೆ
ಕೈಯಾಗಿನ ಬಳೆ ತೋಳಿಗೇರುವವು|
ಕಣ್ಣಲಿ ಕಾಂತಿಯು ಇರದೆ
ಇಟ್ಟಿಹ ನೋಟ ನೆಟ್ಟಂತೆ ಇಹುದು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನು ನಿರಪರಾಧಿ
Next post ಸಿದ್ದತೆ ಏನು

ಸಣ್ಣ ಕತೆ

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

cheap jordans|wholesale air max|wholesale jordans|wholesale jewelry|wholesale jerseys